Select Page

ರುಜುವಾತು

ಯು. ಆರ್. ಅನಂತಮೂರ್ತಿ

ರುಜುವಾತು ಸಂಚಿಕೆಗಳು

ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ. 

ಅಕ್ಷರವಾಗಬಹುದಾದ ರಾಜಕುಮಾರ

 ರಾಜಕುಮಾರ್‌ ಕಣ್ಮರೆಯಾದನಂತರ ಅವರ ಕುಟುಂಬವನ್ನು ನೋಡಲು ಹೋದಾಗ ನಾನೊಂದು ಸಲಹೆ ಕೊಟ್ಟಿದ್ದೆ. ನನ್ನ ಸೂಚನೆಗೆ ಮನಃಪೂರ್ವಕವಾಗಿ ಪಾರ್ವತಮ್ಮನವರೂ ಅವರ ಪುತ್ರರೂ ಮಿಡಿದಿದ್ದರು. ಕನ್ನಡ ಭಾಷೆಗೂ ಕನ್ನಡ ನಾಡಿಗೂ ತಾನೇನೆಂಬ ಅರಿವನ್ನು ತಂದವರು ನಮ್ಮ ದೊಡ್ಡ ಲೇಖಕರು ಮಾತ್ರವಲ್ಲ, ವರನಟ ರಾಜಕುಮಾರ್‌ ಕೂಡಾ ಮುಖ್ಯರು.

ಕನ್ನಡ ಭಾಷೆ ನಮ್ಮ ಆಧುನಿಕ ಕಾಲದಲ್ಲಿ ಉಳಿಯಲು ಬೆಳೆಯಲು ಕನ್ನಡಿಗರೆಲ್ಲರೂರಾಜ್ ಅಭಿಮಾನಿಗಳು ಅಕ್ಷರಸ್ಥರಾಗುವುದು ಕನಿಷ್ಠವಾದ ಒಂದು ಅಗತ್ಯ. ರಾಜಕುಮಾರ್‌ ಅವರ ನೆನಪನ್ನು ಶಾಶ್ವತಗೊಳಿಸುವ ಕೆಲಸ ಇದಾದ್ದರಿಂದ ಅವರ ಕೋಟ್ಯಾಂತರ ಅಭಿಮಾನಿಗಳು ಈ ಸಾಕ್ಷರತಾ ಆಂದೋಲನದಲ್ಲಿ ಭಾಗಿಗಳಾಗಬೇಕು. ಅಕ್ಷರಬಲ್ಲ ಅಭಿಮಾನಿಗಳು ಅಕ್ಷರ ಬಾರದವರಿಗೆ ಕಲಿಸಬೇಕು; ಅಕ್ಷರ ಬಾರದವರು ತಮ್ಮ ಅಣ್ಣನಿಗೆ ಇದು ಪ್ರಿಯವಾಗುತ್ತದೆಂದು ತಿಳಿದು ಅಕ್ಷರ ಕಲಿಯಬೇಕು. ಅವರು ಸಮಾಯಾಗಿರುವ ಜಾಗದಲ್ಲಿ ನೀವು ಯಾವ ಹೊತ್ತಿಗೆ ಹೋಗಿ ನೋಡಿದರೂ ಅಲ್ಲಿ ಹಣ್ಣುಕಾಯಿ ತಂದು ತಮ್ಮ ಈ ಪ್ರೀತಿಯನಟನಿಗೆ ಅರ್ಪಿಸುವವರನ್ನು ನಾವು ನೋಡುತ್ತೇವೆ. ಇವರಲ್ಲಿ ಬಡಬಗ್ಗರೇ ಹೆಚ್ಚು ಜನ. ಈ ಎಲ್ಲರಿಗೆ ಅಕ್ಷರ ಜ್ಞಾನವೆಂದರೆ ತಾವು ಮರ್ಯಾದೆಯಿಂದ ಬದುಕಲು ಈ ಕಾಲದ ಬಹು ದೊಡ್ಡ ಅಗತ್ಯವೆಂದು ತಿಳಿಯಬೇಕು. ಅಕ್ಷರಜ್ಞಾನದ ಅಗತ್ಯವಿಲ್ಲದೆ ಇದ್ದವರು ವೇದಕಾಲದ ಋಷಿಗಳು ಮಾತ್ರ.

ಪಾರ್ವತಮ್ಮನವರ ಜೊತೆ ಮಾತಾಡಿದಾಗ ಈ ಅಕ್ಷರ ಆಂದೋಲನವನ್ನು ರಾಜಕುಮಾರರ ಹೆಸರಿನಲ್ಲಿ ಹೇಗೆ ಮಾಡಬಹುದೆಂಬ ನನ್ನ ವಿಚಾರ ಮಸುಕಾಗಿತ್ತು. ಈಗದು ಸ್ಪಷ್ಟವಾಗಿರುವುದರಿಂದ ಬರೆಯುತ್ತಿದ್ದೇನೆ. ಸಾಕ್ಷರತಾ ಆಂದೋಲನದಲ್ಲಿ ಒಂದಷ್ಟು ಜನ ಅಕ್ಷರಸ್ಥರಾದರು; ಆದರೆ ಕೇವಲ ಅಕ್ಷರವನ್ನು ಗುರುತಿಸಬಲ್ಲವರಾದರು. ಸರಾಗವಾಗಿ ಇವರು ಓದಲಾರರು. ಬಹು ಮುಖ್ಯವಾಗಿ ಇಂಥವರ ದೃಷ್ಟಿಯಿಂದಲೂ, ಅಕ್ಷರವೇ ಬಾರದವರಿಗೆ ಕಲಿಯಬೇಕೆಂಬ ಆಸೆ ಹುಟ್ಟಿಸುವ ದೃಷ್ಟಿಯಿಂದಲೂ, ಶಾಲೆಗೆ ಇನ್ನೂ ಹೋಗದ ಮಕ್ಕಳ ದೃಷ್ಟಿಯಿಂದಲೂ ನಾವು ಮಾಡಬಹುದಾದ ಒಂದು ಕೆಲಸವಿದೆ. ಇದು ಸಾಧ್ಯವಾಗುವುದು ಎಲ್ಲ ಗ್ರಾಮ ಪಂಚಾಯಿತಿಗಳೂ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಾಗ. ರಾಜಕುಮಾರರನ್ನು ಪ್ರೀತಿಸಿದವರೆಲ್ಲರೂ ಇದು ಕನ್ನಡದ ಶ್ರೇಷ್ಠ ನಟನೊಬ್ಬನಿಗೆ ನಾವು ಮಾಡುವ ಶ್ರಾದ್ಧ ಎಂದು ತಿಳಿದಾಗ.

***

ನನ್ನ ಮನಸ್ಸಿನಲ್ಲಿ ಬಂದು ಹೋದ ಈ ವಿಚಾರ ಯಶಸ್ವಿಯಾಗುತ್ತದೆಂದು ಮನದಟ್ಟಾದ್ದು ಜುಲೈ 30ನೇ ತಾರೀಖು ದೆಹಲಿಯಲ್ಲಿ ನಾನೊಂದು ಚರ್ಚೆಯಲ್ಲಿ ಭಾಗವಹಿಸಿದಾಗ. ಸಂದರ್ಭ ಪಿಟ್ರೋಡರವರ ಅಧ್ಯಕ್ಷತೆಯಲ್ಲಿ ನಮ್ಮ ಸರ್ಕಾರ ನಾಲೆಡ್ಜ್‌ ಕಮಿಷನ್‌ ಎಂಬ ಸಂಸ್ಥೆಯೊಂದನ್ನು ಶುರುಮಾಡಿದೆ. ಈ ಹೆಸರು ಕೊಂಚ ಗರ್ವದ್ದಾಯಿತು ಎಂದು ನಾನು ಅನುಮಾನ ಪಟ್ಟರೂ ಅಕ್ಷರ ಚಳುವಳಿಬಗ್ಗೆಯಲ್ಲವೇ ಎಂದು ಹೋದೆ.

ಕೃಷಿಯೋ ಗಣಿಗಾರಿಕೆಯೋ?

ಲೇಖನದ ಒಟ್ಟು ಉದ್ದೇಶವಾದ ನೀತಿಯೊಂದನ್ನು ಮೊದಲೇ ಸರಳವಾಗಿ ಮಂಡಿಸಿಬಿಡುತ್ತೇನೆ: ಅದಿರನ್ನು ಪರದೇಶಗಳಿಗೆ ಮಾರುವ ಗಣಿಗಾರಿಕೆಯನ್ನು ನಮ್ಮ ಸರ್ಕಾರ ಕೂಡಲೇ ನಿಷೇಧಿಸಬೇಕು; ನಮಗೆ ಅಗತ್ಯವಾದ ಲೋಹವನ್ನು ತಯಾರಿಸಿಕೊಳ್ಳಲು ಮಾತ್ರ ಗಣಿಗಾರಿಕೆಯನ್ನು ಮಾಡಬೇಕು. ಒಳ್ಳೆಯ ಬೆಲೆಗೆ ಪರದೇಶಗಳಿಗೆ ಮಾರಲು ವಿವೇಕಯುತವಾಗಿ ನಮ್ಮ ಅಗತ್ಯಕ್ಕಿಂತ ಹೆಚ್ಚಿನ ಲೋಹವನ್ನು ಮಾಡಬಹುದು; ಆದರೆ ಗಣಿಗಾರಿಕೆಯಿಂದಲೂ ಉಕ್ಕಿನ ಉತ್ಪಾದನೆಯಿಂದಲೂ ಪರಿಸರದ ನಾಶವಾಗದಂತೆ ಎಚ್ಚರ ವಹಿಸಿರಬೇಕು. ಇದಿಷ್ಟು ಗಣಿಗಾರಿಕೆಯ ಬಾಲಬೋದೆ.