Select Page

ರುಜುವಾತು

ಯು. ಆರ್. ಅನಂತಮೂರ್ತಿ

ರುಜುವಾತು ಸಂಚಿಕೆಗಳು

ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ. 

ಭಾಷಾಂತರದ ಗಂಡಾಂತರ

ಕನ್ನಡವು ಕನ್ನಡವ ಕನ್ನಡಿಸುತಿರಬೇಕು-ದ.ರಾ.ಬೇಂದ್ರೆ

ಗಾಯತ್ರಿ ಸ್ಪೀವಾಕ್‌ ಅವರು `ಟ್ರಾನ್ಸ್‌ಲೇಷನ್‌ ಥಿಯರಿ' ಬಗ್ಗೆ ಅನನ್ಯವಾದ ಒಳನೋಟ ಪಡೆದವರು- ಬಂಗಾಳದ ಮೂಲ ನಿವಾಸಿಗಳ ನಡುವೆ ಅವರು ಮಾಡುತ್ತಿರುವ ಕೆಲಸದ ಮೂಲಕ, ಜೊತೆಗೇ ಮಹಾಶ್ವೇತದೇವಿಯವರ ಕೃತಿಗಳನ್ನು ಇಂಗ್ಲಿಷಿಗೆ ತರುವುದರ ಮೂಲಕ. ವಸಾಹತುಶಾಹಿಯ ವಿರುದ್ಧದ ಅವರ ಹೋರಾಟದಲ್ಲಿ ಡೆರಿಡಾನನ್ನು ಮೂಲದಲ್ಲಿ ನೋಡಿ ಅರ್ಥ ಮಾಡಿಕೊಂಡು ಅನುವಾದಿಸಿದವರು ಇವರು. ಸ್ಪೀವಾಕ್‌ ಟ್ರಾನ್ಸ್‌ಲೇಷನ್‌ಗೆ ಬಳಸುವ ಪದ ಅನುವಾದ. ಅನುಸರಿಸು, ಅನುವಾಗು, ಅನುಸಂಧಾನಿಸು-ಈ ಅರ್ಥಗಳನ್ನು ಹೊಳೆಯಿಸುವ ಪದ ಅನುವಾದ. ಭಾಷಾಂತರಕ್ಕಿಂತ ಸೂಕ್ಷ್ಮವಾದ ಹೊಳಹುಗಳು ಅನುವಾದ ಶಬ್ದದಲ್ಲಿ ಇದೆ ಎಂದುಕೊಳ್ಳಬಹುದು.

ನಾಗರಿಕತೆ ಎಂಬ ‘ಗುಡ್ ಐಡಿಯಾ’

ನೋಯಿಡಾ ಘಟನೆಯನ್ನು ಇಡೀ ದೇಶ ಚರ್ಚಿಸುತ್ತಿದೆ. ಬಡ ಮಕ್ಕಳ ಸರಣಿ ಕೊಲೆಯ ಬಗ್ಗೆ ಕೇಳಿದೊಡನೆ ನಾವು ಪಟ್ಟ ಒಂದು ಘಳಿಗೆಯ ತಲ್ಲಣ ಈಗ ಕುತೂಹಲವಾಗಿ ಪರಿಣಮಿಸುತ್ತಿದೆ. ಮಾನವನ ಪಾಡೇ ಇದಿರಬಹುದು. ಹೆಚ್ಚು ಕಾಲ ಸತ್ಯ ದರ್ಶನದ ತಲ್ಲಣವನ್ನು ನಾವು ಸಹಿಸಲಾರೆವು. ಈಗ ನಮ್ಮ ಕುತೂಹಲ ಮಕ್ಕಳನ್ನು ಕೊಂದು ಅವರು ತಿಂದಿರಬಹುದೆ? ಅಂಗಾಂಗಗಳನ್ನು ಮಾರಿಕೊಂಡಿರಬಹುದೆ? ಇದೊಂದು ಅವರ ಮನೋವಿಕಾರವಿರಬಹುದೆ? ಕಾನೂನಿನ ಪ್ರಕಾರ ಅವರಿಗೆ ಶಿಕ್ಷೆಯಾಗುತ್ತದೆಯೆ? ಇತ್ಯಾದಿ. ಹೀಗೆನ್ನಿಸುವುದೆಲ್ಲ ಸಹಜವೇ; ಆದರೆ ಕೊಂಚ ಸುಮ್ಮನಿದ್ದು ನೋಡಿಕೊಂಡರೆ ನಮಗೇ ನಮ್ಮ ಬಗ್ಗೆ ಅಸಹ್ಯವಾಗುತ್ತದೆ.