ರುಜುವಾತು
ಯು. ಆರ್. ಅನಂತಮೂರ್ತಿ
ರುಜುವಾತು ಸಂಚಿಕೆಗಳು
ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್ನಲ್ಲಿ.
ಓಟ್ ಬ್ಯಾಂಕ್ ರಾಜಕಾರಣದ ಮಾತು-ಕೃತಿ
ಮಾತಿಗೂ ವರ್ತನೆಗೂ ನಡುವೆ ಕೆಲವೊಮ್ಮೆ ವ್ಯತ್ಯಾಸಗಳಿರುತ್ತವೆ. ಒಂದು ಆತ್ಮವಂಚನೆಯಿಂದ ಹುಟ್ಟುವ ವ್ಯತ್ಯಾಸ. ಇನ್ನೊಂದು ಉದ್ದೇಶ ಪೂರ್ವಕ ವಂಚನೆಯಿಂದ ಹುಟ್ಟಿದ ವ್ಯತ್ಯಾಸ. ರಾಜಕೀಯ ಭಂಡ ಆದಾಗ ಆ ಭಂಡತನದಲ್ಲಿ ಮಾತಿಗೂ ಕೃತಿಗೂ ಇರುವ ಉದ್ದೇಶಪೂರ್ವಕ ವ್ಯತ್ಯಾಸ ಅಂತರ್ಗತವಾಗಿರುತ್ತದೆ. ಅದರಲ್ಲಿ ಯಾವ ಒಳತೋಟಿಯೂ ಇರುವುದಿಲ್ಲ. ಈಗ ನಡೆಯುತ್ತಿರುವುದು ಯಾವ ಒಳತೋಟಿಯೂ ಇಲ್ಲದ ರಾಜಕಾರಣ. ಇದರಿಂದ ಜನ ಸಿನಿಕರಾಗುತ್ತಾರೆ. ಹಾಗಾದಾಗ ಇಂಥದ್ದನ್ನು ನಿರ್ವಹಿಸುವುದು ಸುಲಭವಾಗುತ್ತದೆ. ಅದರಿಂದ ಸಿನಿಕನಾಗುವ ಪ್ರಲೋಭನೆಗೆ ಒಳಗಾಗದೆ ಈಗಿನ ರಾಜಕಾರಣದ ಬಗ್ಗೆ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಲು ಇಲ್ಲಿ ಪ್ರಯತ್ನಿಸುತ್ತಿದ್ದೇನೆ.
ಧರ್ಮಕ್ಕೆ ಸ್ಪಂದಿಸದ ರೋಪ್ ವೇ
ನಮ್ಮ ಆಧ್ಯಾತ್ಮಿಕ ಜಗತ್ತನ್ನು ರೂಪಿಸಿರುವ ಕೆಲವು ಮಹಾಗುರುಗಳಿದ್ದಾರೆ. ಇವರಿಗೆ ಯಾವಾಗಲೂ ಪ್ರಪಂಚ ಒಂದು ವಿಸ್ಮಯವಾಗಿ ಕಾಡುತ್ತಿತ್ತು. ಈ ವಿಸ್ಮಯದ ಹಿಂದೆ ಒಂದು ಕಾರಣಶಕ್ತಿ ಇರಬಹುದು ಎಂದು ಅದನ್ನು ಹುಡುಕುತಿದ್ದರು. ಕೆಲವರಿಗೆ ಈ ಕಾರಣ ಶಕ್ತಿ ಒಂದು ಮಹಾಪುರುಷನಾಗಿ ಇನ್ನು ಕೆಲವರಿಗೆ ಮಹಾ ಸ್ತ್ರೀಯಾಗಿ ಮತ್ತೆ ಕೆಲವರಿಗೆ ಅದೊಂದು ವ್ಯಕ್ತಿಗತ ರೂಪವಲ್ಲದ ಮಹಾಶಕ್ತಿಯಾಗಿ ಕಾಣುತ್ತಿತ್ತು.