Select Page

ರುಜುವಾತು

ಯು. ಆರ್. ಅನಂತಮೂರ್ತಿ

ರುಜುವಾತು ಸಂಚಿಕೆಗಳು

ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ. 

ಸಿದ್ಧಾಂತಗಳು ಸತ್ತಂತೆ ಕಾಣುವ ನಮ್ಮ ಕಾಲದಲ್ಲಿ

ಅಪ್ವರ್ಡ್‌ಗೆ ನಾನು ಲಯನಲ್‌ ಟ್ರಿಲ್ಲಿಂಗ್‌ನನ್ನು ಓದಿಸಿದೆ. ರೇಮಂಡ್‌ ವಿಲಿಯಮ್ಸ್‌ನನ್ನು ಅವನು ಓದಿ ಮೆಚ್ಚಿಕೊಂಡಿದ್ದ. ನನ್ನ `ಘಟಶ್ರಾದ್ಧ' ಕಥೆ ವಿ.ಕೆ. ನಟರಾಜರ ಭಾಷಾಂತರದಲ್ಲಿ ಪ್ರಕಟವಾಗಿತ್ತು. ಅದನ್ನು ಓದಿ ಬ್ರಾಡ್‌ ಬರಿಯಂತೆಯೇ ಅಪ್ವರ್ಡ್‌ನೂ ಇಷ್ಟಪಟ್ಟಿದ್ದ. ಬಿಬಿಸಿಯಲ್ಲಿ ಅದನ್ನು ಬಿತ್ತರಿಸಲೂ ಬ್ರಾಡ್‌ಬರಿ ಪ್ರಯತ್ನಿಸಿದ್ದ. ಆದರೆ ನನ್ನ ಕಥೆಯ ಬಾಲಕನ ಧಾರ್ಮಿಕ ಸಂಪತ್ತಿನ ಭಾಷೆ ಇಂಗ್ಲಿಷ್‌ ಹುಡುಗನ ಓದಿನಲ್ಲಿ ಕೃತಕವೆನ್ನಿಸುವುದರಿಂದ ಅದನ್ನು ಕೈಬಿಡಲಾಯಿತು. ಮುಗ್ಧತೆಯಲ್ಲಿ ನನ್ನ ಕಥೆಯ ನಾಣಿ ಸೃಷ್ಟಿಸುವ ಅಲೌಕಿಕದ ಪ್ರಪಂಚ ಬ್ಲೇಕ್‌ ಕಾಲದ ಬಾಲಕನಿಗೆ ಸಾಧ್ಯವೋ ಏನೊ! ಈಗ ನನ್ನ ಮೊಮ್ಮಕ್ಕಳಿಗೂ ಅದು ಅಪರಿಚಿತ. ಇವೆಲ್ಲವನ್ನೂ ನಾನು ಅಪ್ವರ್ಡ್‌ ಜೊತೆ ಚರ್ಚಿಸುತ್ತ ಇದ್ದೆ. 

ಅಪ್ವರ್ಡ್‌ ಮುಖೇನ ಆತ್ಮ ಶೋಧನವಾದ ಸಂಶೋಧನೆ

ಬ್ರಾಡ್‌ ಬರಿ ಪೈಪ್‌ ಸೇದುತ್ತ ತನ್ನ ಟೈಪ್‌ ರೈಟರ್‌ ಎದುರು ಕೂತು ಹೇಳಿದ್ದು ನೆನಪಾಗುತ್ತದೆ: `ಎಡ್ವರ್ಡ್‌ ಅಪ್ವರ್ಡ್‌ ಎಂಬ ವಿಲಕ್ಷಣ ಲೇಖಕನೊಬ್ಬನಿದ್ದ, ಮುವ್ವತ್ತರ ದಶಕದಲ್ಲಿ. ನಾವು ಬ್ರಿಟಿಷರು ಸೈದ್ಧಾಂತಿಕವಾಗಿ ಯೂರೋಪಿಯನ್ನರಂತೆ ಚಿಂತಿಸುವುದೇ ಇಲ್ಲ. ನಿತ್ಯಾನುಭವದ ಸತ್ಯಕ್ಕೆ ಮಾತ್ರ ನಾವು ಬದ್ಧರು. ಮಿಲ್‌ ಮತ್ತು ಬೆಂಥಾಮ್‌ನಂತಹ ಯುಟಿಲಿಟೇರಿಯನ್ನರು ಮಾತ್ರ ನಮ್ಮ ಹೀರೋಗಳು. ಅಪ್ವರ್ಡ್‌ ಅದಕ್ಕೆ ವಿನಾಯಿತಿ. ಮುವ್ವತ್ತರ ದಶಕವೇ ಅದಕ್ಕೆ ವಿನಾಯಿತಿ. ಅಂತಹ ಒಂದು ದಶಕವನ್ನು ಬ್ರಿಟನ್‌ ಮತ್ತೆ ಕಂಡಿಲ್ಲ.’